ಹರಿಯಾಣದಲ್ಲಿ ತೀವ್ರಗೊಂಡ ರೈತರ ಪ್ರತಿಭಟಣೆ; ತಬ್ಬಿಬ್ಬಾದ ಬಿಜೆಪಿ.! » Dynamic Leader
October 22, 2024
ಲೇಖನ

ಹರಿಯಾಣದಲ್ಲಿ ತೀವ್ರಗೊಂಡ ರೈತರ ಪ್ರತಿಭಟಣೆ; ತಬ್ಬಿಬ್ಬಾದ ಬಿಜೆಪಿ.!

ಡಿ.ಸಿ.ಪ್ರಕಾಶ್

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 13 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ 200ಕ್ಕೂ ಹೆಚ್ಚು ಕೃಷಿ ಸಂಘಟನೆಗಳು ಮತ್ತು ರೈತರು ದೆಹಲಿಗೆ ಮುತ್ತಿಗೆ ಹಾಕಿ ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೋರಾಟ ನಡೆಸಿದ ರೈತರನ್ನು, ನೆರೆಯ ದೇಶದ ಗಡಿಯಲ್ಲಿ ಯುದ್ಧ ನಡೆಸುತ್ತಿರುವ ವಿದೇಶಿಯರ ಮೇಲೆ ದಾಳಿ ಮಾಡಿದಂತೆ, ದೆಹಲಿ ಗಡಿಯಲ್ಲಿ ಮೋದಿ ಸರ್ಕಾರವು ತನ್ನ ನಿಯಂತ್ರದಲ್ಲಿರುವ ದೆಹಲಿ ಪೊಲೀಸರು, ಅರೆಸೇನಾ ಪಡೆ ಮತ್ತು ಹರಿಯಾಣ ಬಿಜೆಪಿ ಸರ್ಕಾರದ ಪೊಲೀಸರ ಮೂಲಕ ರೈತರ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಮೋದಿ ಸರ್ಕಾರದ ದಾಳಿಗೆ ಎರಡು ಹಂತದ ಹೋರಾಟಗಳಲ್ಲಿ 800ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, “ನಮ್ಮ ಮೇಲೆ ಹಲ್ಲೆ ನಡೆಸಿ, ನಮ್ಮ ಸಹಪಾಟಿಗಳನ್ನು ಕೊಂದು ಹಾಕಿದ್ದ ನೀವುಗಳು, ನಮ್ಮ ಊರಿಗೆ ಮತ ಕೇಳಲು ಏಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿ, ಹರಿಯಾಣ ಮತ್ತು ಪಂಜಾಬ್ ನಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಬಿಜೆಪಿ ಸದಸ್ಯರನ್ನು ರೈತರು ಓಡಿಸುತ್ತಿದ್ದಾರೆ. ಇದರಲ್ಲಿ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರಿಸ್ಥಿತಿ ತೀರಾ ಹೀನಾಯವಾಗಿದೆ.

ಸಿರ್ಸಾದಲ್ಲಿ ಅಶೋಕ್ ತನ್ವಾರ್, ಅಂಬಾಲಾದಲ್ಲಿ ಬಾಂಟೊ ಕಟಾರಿಯಾ, ಸೋನಿಪತ್‌ನಲ್ಲಿ ಮೋಹನ್ ಲಾಲ್ ಬಡೋಲಿ, ರೋಡಕ್‌ನಲ್ಲಿ ಅರವಿಂದ್ ಶರ್ಮಾ, ಮಹೇಂದ್ರ ಘಾಟ್‌ನಲ್ಲಿ ಧರಂಬೀರ್ ಸಿಂಗ್ ಮತ್ತು ಕುರುಕ್ಷೇತ್ರದಲ್ಲಿ ನವೀನ್ ಜಿಂದಾಲ್ ಅವರಂತಹ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಒಟ್ಟಾಗಿ ಸೇರಿ ಓಡಿಸಿದ್ದರಿಂದ ಅವರು ತಮ್ಮ ಪ್ರಚಾರ ಮತ್ತು ರ‍್ಯಾಲಿಗಳನ್ನುರದ್ದುಗೊಳಿಸಿ ಮನೆ ಸೇರಿದ್ದಾರೆ.

ಮಾಜಿ ಮುಖ್ಯಮಂತ್ರಿ ಖಟ್ಟರ್
ಬಿಜೆಪಿಯ ಹಿರಿಯ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಲೋಕಸಭೆ ಚುನಾವಣೆಯಲ್ಲಿ ಕರ್ನೂಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಪ್ರಚಾರ ಮಾಡಿದಲ್ಲೆಲ್ಲ ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮನೋಹರ್ ಲಾಲ್ ಖಟ್ಟರ್ ಪ್ರಚಾರ ಸಭೆಗಳನ್ನು ರದ್ದುಪಡಿಸಿ ಪಕ್ಷದ ಕಚೇರಿಗೆ ವಾಪಸ್ ತೆರಳಿದ್ದಾರೆ. ಕಳೆದ 4 ದಿನಗಳಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಪ್ರಚಾರ ರದ್ದು
ಮೇ 18 ರಂದು ಹರಿಯಾಣದಲ್ಲಿ ಪ್ರಧಾನಿ ಮೋದಿ ಪ್ರಚಾರ ಆರಂಭಿಸಲಿದ್ದು, ಮೇ 25 ರಂದು 6ನೇ ಹಂತದಲ್ಲಿ ರಾಜ್ಯದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಖಟ್ಟರ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಓಡಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳು ನಡೆಯುವುದು ಖಚಿತವಾಗಿಲ್ಲ ಎಂದು ವರದಿಯಾಗಿದೆ.

“ಇಂಡಿಯಾ” ಮೈತ್ರಿಕೂಟ 7ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ
ಹರಿಯಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ರೈತರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ಹೊಂದಿದ್ದಾರೆ. ಬಿಜೆಪಿಯು ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ‘ಝೀರೋ ಗ್ರೌಂಡ್’ ಮತ್ತು ‘ಲೋಕ್ ಪೋಲ್’ ಸೇರಿದಂತೆ ಮತಗಟ್ಟೆ ಸಮೀಕ್ಷಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಸಮೀಕ್ಷೆಗಳಲ್ಲಿ, ಒಟ್ಟು 10 ಸ್ಥಾನಗಳ ಪೈಕಿ 7ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್-ಆಮ್ ಆದ್ಮಿ ಪಕ್ಷ ಒಳಗೊಂಡ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ. ಜೆಜೆಪಿ ಪಕ್ಷದ ಬೆಂಬಲವನ್ನು ಉಳಿಸಿಕೊಂಡರೆ ಹರಿಯಾಣದಲ್ಲಿ ಬಿಜೆಪಿ “ವೈಟ್‌ವಾಶ್” ಆಗಲಿದೆ ಎಂಬುದು ಗಮನಾರ್ಹ.

SOURCE: theekkathir.in

Related Posts