ಸಂಪಾದಕೀಯ Archives » Dynamic Leader
October 18, 2024
Home Archive by category ಸಂಪಾದಕೀಯ

ಸಂಪಾದಕೀಯ

ದೇಶ ಸಂಪಾದಕೀಯ

ನವದೆಹಲಿ: ಕಳೆದ ತಿಂಗಳು, ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು, ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು.

ಈ ಹಿನ್ನಲೆಯಲ್ಲಿ, ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮಾರ್ಚ್ 12 ರಂದು (ನಾಳೆ ಸಂಜೆಯೊಳಗೆ) ವ್ಯವಹಾರ ಮುಗಿಯುವ ಮೊದಲು ವಿವರಗಳನ್ನು ಬಹಿರಂಗಪಡಿಸುವಂತೆ ಬ್ಯಾಂಕ್‌ಗೆ ಆದೇಶಿಸಿದೆ.

ಎಸ್‌ಬಿಐ, ಮೊಹರು ಮಾಡಿದ ಲಕೋಟೆಯನ್ನು ತೆರೆದು, ವಿವರಗಳನ್ನು ಕ್ರೋಢೀಕರಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು “ಅಸಂವಿಧಾನಿಕ” ಎಂದು ಕರೆದು ರದ್ದುಗೊಳಿಸಿತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ವಿವರಗಳನ್ನು ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ಚುನಾವಣಾ ಬಾಂಡ್‌ಗಳನ್ನು ನೀಡುವ ಬ್ಯಾಂಕ್ ಆಗಿದ್ದ ಎಸ್‌ಬಿಐ, ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಯನ್ನು ಕೋರಿತ್ತು.

ಚುನಾವಣಾ ಬಾಂಡ್‌ಗಳ ಪ್ರಕರಣ: ಸುಪ್ರೀಂ ಕೋರ್ಟ್ನ ಕೆಲವು ಉಲ್ಲೇಖಗಳು:
• ಎಸ್‌ಬಿಐನ ಸಲ್ಲಿಕೆಗಳು ಕೇಳಿದ ಮಾಹಿತಿಯು ಸುಲಭವಾಗಿ ಲಭ್ಯವಿದೆ ಎಂದು ಸೂಚಿಸುತ್ತದೆ. ಹೀಗಾಗಿ ಜೂನ್ 30ರ ವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಾರ್ಚ್ 12, 2024 ರ (ನಾಳೆ ಸಂಜೆಯೊಳಗೆ) ಕೆಲಸದ ಸಮಯದ ಮುಕ್ತಾಯದೊಳಗೆ ವಿವರಗಳನ್ನು ಬಹಿರಂಗಪಡಿಸಲು SBI ಗೆ ನಿರ್ದೇಶಿಸಲಾಗಿದೆ.

• ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯು ಅದರ ಬಗ್ಗೆ ಮೌನವಾಗಿದೆ.

• ನೀವು ಈ ರೀತಿಯ ವಿಸ್ತರಣೆಯೊಂದಿಗೆ ಬಂದಾಗ ಇದು ಗಂಭೀರ ವಿಷಯವಾಗಿದೆ. ನಮ್ಮ ತೀರ್ಪು ಕ್ರಿಸ್ಟಲ್ ಕ್ಲಿಯರ್ ಆಗಿದೆ.

• SBI ಕೇವಲ ಮುಚ್ಚಿದ ಕವರ್ ತೆರೆಯಬೇಕು, ವಿವರಗಳನ್ನು ಕೊಲೇಟ್ ಮಾಡಿ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು.

• ನೀವು ದೇಶದ ನಂಬರ್ 1 ಬ್ಯಾಂಕ್ ಆಗಿದ್ದೀರಿ, ಎಸ್‌ಬಿಐ ಮುಂದೆ ಬಂದು ವಿವರಗಳನ್ನು ಹಂಚಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

“ಮೂರು ಪರ್ಸೆಂಟ್ ಜನರಿಗಾಗಿ ಬಹುಸಂಖ್ಯಾತರಾದ ದಲಿತ, ಶೂದ್ರ ವರ್ಗದ ಯುವ ಸಮುದಾಯವು ಹಗಲಿರಳು ದುಡಿದು, ಅಪರಾಧ ಕೃತ್ಯಗಳಲ್ಲಿ ಸಿಲುಕಿಕೊಂಡಿರುವುದು ವೇದನೆಯಾಗಿದೆ”

ಜನವರಿ 25, 2011 ರಂದು, ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಚುನಾವಣಾ ಆಯೋಗವು ಜನವರಿ 1 ರಂದು 18 ವರ್ಷ ತುಂಬಿದ ಅರ್ಹ ಮತದಾರರನ್ನು ಗುರುತಿಸಲು ಪ್ರಾರಂಭಿಸಿದ ಈ ದಿನಕ್ಕೆ ಇತಿಹಾಸವಿದೆ. ತಮ್ಮನ್ನು ಮತದಾರರಾಗಿ ನೋಂದಾಯಿಸಿಕೊಂಡವರಿಗೆ ಮತದಾರ ಗುರುತಿನ ಚೀಟಿ (EPIC) ನೀಡಲಾಗುತ್ತದೆ.

ಪ್ರತಿ ವರ್ಷ ಮತದಾರರ ದಿನವು ಜನವರಿ 25 ರಂದು ಆಚರಿಸಲಾಗುತ್ತದೆ; ಇದು ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಸಹ ಸೂಚಿಸುತ್ತದೆ. 1950ರಲ್ಲಿ ಭಾರತದ ಮೊದಲ ಚುನಾವಣಾ ಆಯೋಗವು ಜಾರಿಗೆ ಬಂದಿತು. ಈ ದಿನವು ಮತದಾನದ ಹಕ್ಕನ್ನು ನೆನಪಿಸುತ್ತದೆ ಮತ್ತು ಮತದಾನ ಹಾಗೂ ಮತದಾರರ ನೋಂದಣಿಯ ಪರಿಕಲ್ಪನೆಯ ಮೇಲೆ ಕೇಂದ್ರೀಕರಿಸುತ್ತದೆ.

ಭಾರತದ ಪ್ರಜಾಪ್ರಭುತ್ವವು ಮತದಾನದಲ್ಲಿ ಅಡಗಿದೆ. ಮತ್ತು ಈ ದಿನವನ್ನು ಆಚರಿಸುವುದರಿಂದ ದೇಶದ ಚುನಾವಣಾ ಪ್ರಕ್ರಿಯೆಯ ಭಾಗವಾಗಿರುವ ಮಹತ್ವವನ್ನು ಹರಡುತ್ತದೆ. ಭಾರತದಲ್ಲಿ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ದಿನವು ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ.

ದೇಶದ ಭವಿಷ್ಯದ ಅಭಿವೃದ್ಧಿಗಾಗಿ ಯುವ ಪೀಳಿಗೆಯಿಂದ ಆಯ್ಕೆಯಾಗುವ ಸರಿಯಾದ ನಾಯಕತ್ವ ರಾಷ್ಟ್ರಕ್ಕೆ ಅಗತ್ಯವಿದೆ. ಆದರೆ, ಪ್ರಜಾಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಮಾರಕವಾಗಿರುವ ನಾಯಕತ್ವಕ್ಕೆ ನಾವು ಮತ ಚಲಾಯಿಸಿದ್ದೇವೆ ಎಂಬ ಆತಂಕವನ್ನು ಸೃಷ್ಟಿಸಲಾಗಿದೆ. ಇದನ್ನು ಹೆಚ್ಚಿನ ಮತದಾರರಲ್ಲಿ ಕಾಣಬಹುದು.

ಕೇಂದ್ರದಲ್ಲಿ ನಮ್ಮನ್ನು ಆಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕಾರ್ಪೊರೇಟ್ ಪರವಾದ ಸರ್ಕಾರವಾಗಿದ್ದರೂ ನಿರುದ್ಯೋಗ ಸಮಸ್ಯೆ ಬಗೆಹರಿಯಲಿಲ್ಲ. ಯಾಂತ್ರೀಕರಣ, ಕಂಪ್ಯೂಟರೀಕರಣ ಹಾಗೂ ವಿಪರೀತವಾದ ಉದ್ಯೋಗ ಕಡಿತವೇ ನಿರುದ್ಯೋಗಕ್ಕೆ ಕಾರಣವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂಬುದು ಚುನಾವಣೆಯ “ಮೋಡಿ ಮಸ್ತಾನ್” ಗಿಮಿಕ್ ಎಂಬುದನ್ನು ಮತದಾರ ಬಂಧುಗಳಿಗೆ ಅರ್ಥವಾಗಿದೆ.

ನಿರೋದ್ಯೋಗಿ ಯುವಕರಿಗೆ ಸಂಘಪರಿವಾರಗಳಲ್ಲಿ ಫುಲ್ ಟೈಂ ಬಿಟ್ಟಿ ನೌಕರಿ ಕೊಡಿಸುವುದೇ ದೊಡ್ಡ ಸಾದನೆಯಾಗಿದೆ. ರಾಷ್ಟ್ರಸೇವೆ ಎಂಬ ಹೆಸರಿನಲ್ಲಿ, ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ವರ್ತಿಸುವುದು, ಸಾಮೂಹಿಕ ಅತ್ಯಾಚಾರ ಮಾಡುವುದು, ಸಂಘಟಿತ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು, ದ್ವೇಶ ಭಾಷಣ ಮಾಡುವುದು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳನ್ನು ಅವಮಾನಿಸಿ ಮಾತನಾಡುವುದು ಇತ್ಯಾದಿಗಳು ಇವರಿಗೆ ನೀಡಿದ ಜವಾಬ್ದಾರಿಗಳಾಗಿವೆ.

ರಾಷ್ಟ್ರಸೇವೆ, ದೇಶಭಕ್ತಿಯ ಅಮಲಿನಲ್ಲಿ ಸಿಲುಕಿಕೊಂಡಿರುವ ಯುವ ಪೀಳಿಗೆಯನ್ನು ಅದರಿಂದ ಹೊರತೆಗೆಯುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಮೂರು ಪರ್ಸೆಂಟ್ ಜನರಿಗಾಗಿ ಬಹುಸಂಖ್ಯಾತರಾದ ದಲಿತ, ಶೂದ್ರ ವರ್ಗದ ಯುವ ಸಮುದಾಯವು ಹಗಲಿರಳು ದುಡಿದು, ಅಪರಾಧ ಕೃತ್ಯಗಳಲ್ಲಿ ಸಿಲುಕಿಕೊಂಡಿರುವುದು ವೇದನೆಯಾಗಿದೆ. ರಾಷ್ಟ್ರೀಯ ಮತದಾರರ ದಿನವಾದ ಇಂದು ಮೊದಲ ಬಾರಿಗೆ ಮತದಾರರಾಗಿರುವ ಯುವ ಸಮುದಾಯಕ್ಕೆ ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಹೇಳಿಕೊಡುವ ಕೆಲಸಗಳು ಆಗಬೇಕಿದೆ.

ಅದರ ಜೊತೆಯಲ್ಲಿ, ಸಂಘಪರಿವಾರದ ಜೊತೆಗೆ ಗುರುತಿಸಿಕೊಂಡು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಜೈಲು ಶಿಕ್ಷೆ ಅನುಭವಿಸುತ್ತಿರುವ ದಲಿತ, ಶೂದ್ರ ಯುವಕರಿಗೆ ಜೈಲಿನಲ್ಲಿ ವಿಶೇಷ ತರಗತಿಗಳನ್ನು ನಡೆಸಿ, ಭಾರತೀಯ ಇತಿಹಾಸ, ಸ್ವಾತಂತ್ರ್ಯ ಚಳುವಳಿ, ಪ್ರಜಾಪ್ರಭುತ್ವ, ಸಂವಿಧಾನ, ರಾಜಕೀಯ ವ್ಯವಸ್ಥೆ, ಬಹುಸಂಸ್ಕೃತಿ, ಭಾಷಾ ಸಂಸ್ಕೃತಿ, ಜಾತಿ ರಚನೆ, ಭಕ್ತಿ ಚಳುವಳಿ, ಸಾಮಾಜಿಕ ನ್ಯಾಯ ಚಳುವಳಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಮ್ಮ ನಾಯಕರುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನವಾಗಬೇಕು. ಇದಕ್ಕೆ ನಮ್ಮ ಸರ್ಕಾರ ಜೈಲಿನಲ್ಲಿ ಕೊಳೆಯುತ್ತಿರುವ ಯುವ ಸಮುದಾಯದ ಮನ ಪರಿವರ್ತನೆಗಾಗಿ ನೂತನ ಯೋಜನೆಯೊಂದನ್ನು ರೂಪಿಸಬೇಕೆಂದು ಈ ಸಂದರ್ಭದಲ್ಲಿ ನಾವು ಸರ್ಕಾರವನ್ನು ಒತ್ತಯಿಸುತ್ತೇವೆ.

ಮತದಾನ ಹಕ್ಕು ಮತ್ತು ಮೀಸಲಾತಿ ಇವೆರಡೂ ನಮ್ಮ ಕಣ್ಣುಗಳಿದ್ದಂತೆ. ಅದನ್ನು ತಂದುಕೊಟ್ಟವರು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಅದನ್ನು ಯಾವತ್ತೂ ಕಳೆದುಕೊಳ್ಳಬಾರದು. ಪ್ರಾಣತೆತ್ತಾದರೂ ಪ್ರಜಾಸತ್ತಾತ್ಮಕವಾಗಿ ಹೋರಾಡಿ ಅದನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮತದಾರ ಬಂಧುಗಳಿಗೆ ರಾಷ್ಟ್ರೀಯ ಮತದಾರರ ದಿನ ಶುಭಾಶಯಗಳು.

ಸಂಪಾದಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬುದು ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ; ಮತ್ತು ಇದು ಸಂವಿಧಾನದಲ್ಲಿ ಒದಗಿಸಲಾದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನು ಹಾಳುಮಾಡುವ ಕ್ರಮವಾಗಿದೆ.

ಸಂವಿಧಾನ ಏನು ಹೇಳುತ್ತದೆ?
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಸುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಸಂಸತ್ತು/ವಿಧಾನಸಭೆಗೆ ಉತ್ತರದಾಯಿಗಳಾಗಿರಬೇಕು ಎಂಬ ಸಾಂವಿಧಾನಿಕ ನಿಬಂಧನೆಯನ್ನು ಉಲ್ಲಂಘಿಸುತ್ತದೆ. ಸಂವಿಧಾನದ 75(3)ನೇ ವಿಧಿಯು ಸಂಸತ್ತಿಗೆ/ಶಾಸಕಾಂಗಕ್ಕೆ ಉತ್ತರಿಸಲು ಮಂತ್ರಿಗಳು ಸಾಮೂಹಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳುತ್ತದೆ. ಅದೇ ರೀತಿ 164(1)ನೇ ವಿಧಿಯು ರಾಜ್ಯಗಳಲ್ಲಿ ಆಡಳಿತ ನಡೆಸುವ ಮಂತ್ರಿಗಳು ರಾಜ್ಯ ಶಾಸಕಾಂಗಗಳಿಗೆ ಉತ್ತರಿಸಲು ಸಾಮೂಹಿಕವಾಗಿ ಜವಾಬ್ದಾರರಾಗಿರುತ್ತಾರೆ.

ಸಂವಿಧಾನದ ಪ್ರಕಾರ, ಸಂಸತ್ತು/ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಂಗೀಕಾರವಾದರೆ ಮತ್ತು ಸಂಸತ್ತು/ವಿಧಾನಸಭೆಯಲ್ಲಿ ವಿಶ್ವಾಸ ಕಳೆದುಕೊಂಡರೆ ಅಥವಾ ಹಣಕಾಸು ಮಸೂದೆ ಸೋತರೆ ಸರ್ಕಾರವು ರಾಜೀನಾಮೆ ನೀಡಲು ಬದ್ಧವಾಗಿರುತ್ತದೆ. ಬದಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ಲೋಕಸಭೆ/ವಿಧಾನಸಭೆ ವಿಸರ್ಜಿಸಿ ಉಪಚುನಾವಣೆ ನಡೆಸಬೇಕು.

ಅಧಿಕಾರಾವಧಿಯನ್ನು ವಿಸ್ತರಿಸುವುದು ಕಾನೂನು ಬಾಹಿರ:
ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳಿಗೆ ಯಾವುದೇ ನಿಗದಿತ ಅಧಿಕಾರಾವಧಿ ಇರುವುದಿಲ್ಲ. ಸಂವಿಧಾನದ 83(2) ಮತ್ತು 172(1) ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯು ಯಾವ ಕಾರಣಕ್ಕಾದರೂ ಅವುಗಳನ್ನು ಮೊದಲೇ ವಿಸರ್ಜಿಸದಿದ್ದರೆ ಐದು ವರ್ಷ ಆಗಲಿದೆ ಎಂದು ತಿಳಿಸಲಾಗಿದೆ.

ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ಪ್ರಯತ್ನವು ಸಂವಿಧಾನ ವಿರೋಧಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ. ಜನಪ್ರತಿನಿಧಿಗಳ ಮೂಲಕ ಜನರ ಹಿತ ಸದಾ ಮೇಲುಗೈ ಸಾಧಿಸಬೇಕು.

ರಾಷ್ಟ್ರಪತಿ ಆಳ್ವಿಕೆಗೆ ಪ್ರಯತ್ನ:
ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲು ವಿವಿಧ ಸಲಹೆಗಳನ್ನು ಮುಂದಿಡಲಾಗಿದೆ. ಈ ನಿಟ್ಟಿನಲ್ಲಿ ನೀತಿ ಆಯೋಗವು, ಲೋಕಸಭೆಯ ವಿಸರ್ಜನೆ ಅನಿವಾರ್ಯವಾದರೆ, ಉಳಿದ ಲೋಕಸಭೆಯು ಕಡಿಮೆ ಅವಧಿಯನ್ನು ಹೊಂದಿದ್ದರೆ, ಆ ಅವಧಿಗೆ ದೇಶದಾದ್ಯಂತ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲು ಸೂಕ್ತವಾದ ಒಂದು ಷರತ್ತನ್ನು ರಚಿಸಬಹುದು ಎಂದು ಸಲಹೆ ನೀಡಿದೆ. ಅಂದರೆ ಮುಂದಿನ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗುವವರೆಗೆ ಅವರೇ ನೇಮಿಸುವ ಸಚಿವ ಸಂಪುಟವೇ ದೇಶದ ಆಡಳಿತ ನಡೆಸಬೇಕು ಎಂಬ ಪ್ರಸ್ತಾಪವು ರಾಷ್ಟ್ರಪತಿಯನ್ನು ಆಡಳಿತಗಾರನನ್ನಾಗಿ ಮಾಡುತ್ತದೆ. ಇದು ಹಿತ್ತಲಿನ ಮೂಲಕ ರಾಷ್ಟ್ರಪತಿ ಆಳ್ವಿಕೆಯನ್ನು ತರುವ ಕ್ರಮವಾಗಿದೆ.

ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡುವ ಹಕ್ಕಿನ ಮೇಲೆ ದಾಳಿ:
ವಿಧಾನಸಭೆ ವಿಸರ್ಜನೆಯ ಸಮಯದಲ್ಲಿ, ಉಳಿದ ಅವಧಿಯು ದೀರ್ಘವಾಗಿದ್ದರೆ, ಹೊಸದಾಗಿ ಚುನಾವಣೆಗಳನ್ನು ನಡೆಸಬೇಕು ಮತ್ತು ಅವು ಉಳಿದ ಅವಧಿಗೆ ಮಾತ್ರ ಇರುತ್ತವೆ. ಅಂದರೆ, ಎರಡು ವರ್ಷಗಳ ಅಧಿಕಾರಾವಧಿಯ ನಂತರ ವಿಸರ್ಜಿಸಲ್ಪಟ್ಟರೆ, ಮುಂದಿನ ಚುನಾವಣೆಯು ಮೂರು ವರ್ಷಗಳ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.

ಈ ಕಾರಣಕ್ಕಾಗಿಯೇ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಯತ್ನವು ಪ್ರಜಾಪ್ರಭುತ್ವದ ಮೇಲೆ ನಡೆಸುವ ದಾಳಿಯಾಗಿದೆ. 2015ರ ಸಂಸದೀಯ ಸ್ಥಾಯಿ ಸಮಿತಿಯ 79ನೇ ವರದಿ ಮತ್ತು ಹಣಕಾಸು ಆಯೋಗ ಜಾರಿಗೊಳಿಸಿರುವ ಪ್ರಸ್ತಾವನೆಯಲ್ಲಿ, ‘ಕೆಲವು ಶಾಸಕಾಂಗಗಳ ಅಧಿಕಾರಾವಧಿಯನ್ನು ವಿಸ್ತರಿಸುವುದು,ಅಥವಾ ಕೆಲವು ಶಾಸಕಾಂಗಗಳ ಅಧಿಕಾರಾವಧಿಯನ್ನು ಕಡಿತಗೊಳಿಸುವುದು’ ಎಂದು ಸೂಚಿಸಿದೆ. ಈ ರೀತಿ ಶಾಸಕಾಂಗದ ಅಧಿಕಾರಾವಧಿಯನ್ನು ವಿಸ್ತರಿಸುವುದು ಅಥವಾ ಮೊಟಕುಗೊಳಿಸುವುದು ರಾಜ್ಯಗಳ ಹಕ್ಕುಗಳ ಮೇಲಿನ ದಾಳಿಯಾಗಿದೆ. ಇದು ರಾಜ್ಯದ ಜನರು ತಮ್ಮ ಶಾಸಕರನ್ನು ಆಯ್ಕೆ ಮಾಡುವ ಹಕ್ಕಿನ ಮೇಲಿನ ದಾಳಿಯಾಗಿದೆ.

ರಾಜ್ಯ ಶಾಸಕಾಂಗಗಳಿಗೆ ಸಂಬಂಧಿಸಿದಂತೆ ಮತ್ತೊಂದು ಸಲಹೆಯನ್ನೂ ಮುಂದಿಡಲಾಗಿದೆ. ‘ರಾಜ್ಯ ವಿಧಾನಸಭೆಯು ಅದರ ಅವಧಿಯ ಅಂತ್ಯದ ಮೊದಲೇ ವಿಸರ್ಜಿಸಲ್ಪಟ್ಟರೆ, ರಾಜ್ಯದ ರಾಜ್ಯಪಾಲರು ಅದರ ಉಳಿದ ಅವಧಿಗೆ ರಾಜ್ಯವನ್ನು ಆಳುವುದು’ ಎಂದು ಹೇಳಿದೆ. ಇದರರ್ಥ ಕೇಂದ್ರ ಸರ್ಕಾರದ ಆಡಳಿತವನ್ನು ರಾಜ್ಯಗಳ ಮೇಲೆ ನೇರವಾಗಿ ತರುವುದನ್ನು ಬಿಟ್ಟರೆ ಬೇರೇನೂ ಅಲ್ಲ!

ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಸ್ತಾಪಗಳು:
ಸಂಸತ್ತು/ಶಾಸಕಾಂಗಗಳ ಜವಾಬ್ದಾರಿಯನ್ನು ನಿರಾಕರಿಸುವ ಮತ್ತು ಆಡಳಿತಗಾರರ ಅಧಿಕಾರಾವಧಿಯನ್ನು ವಿಸ್ತರಿಸುವ ಅಸಂಖ್ಯಾತ ಪ್ರಸ್ತಾಪಗಳನ್ನು ಮುಂದಿಡಲಾಗಿದೆ. ಭಾರತದ ಕಾನೂನು ಆಯೋಗದ ಕರಡು, ವರ್ಕಿಂಗ್ ಪೇಪರ್ ಸೇರಿದಂತೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಸದನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಣಯವನ್ನು ಲಗತ್ತಿಸಬೇಕು ಎಂದು ಪ್ರಸ್ತಾಪಿಸಲಾಗಿದೆ. ಇದರರ್ಥ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಷರತ್ತಿನೊಂದಿಗೆ ಸದಸ್ಯರು ಹಾಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂಬುದಾಗಿದೆ. ಚುನಾಯಿತ ಶಾಸಕರು ಮತ್ತು ಲೋಕಸಭೆಯ ಸದಸ್ಯರು ಯಾವುದೇ ಸರ್ಕಾರಕ್ಕೆ ಮತ ಚಲಾಯಿಸುವ ಹಕ್ಕನ್ನು ಮೊಟಕುಗೊಳಿಸಲಾಗದು. ಅಥವಾ ಸದನದಲ್ಲಿ ನಿಶ್ಚಿತ ಬಹುಮತ ಹೊಂದಿರುವ ಆಡಳಿತ ಪಕ್ಷವು ಸದನವನ್ನು ವಿಸರ್ಜಿಸುವ ಮತ್ತು ಅವಧಿಪೂರ್ವ ಚುನಾವಣೆಗೆ ಶಿಫಾರಸು ಮಾಡುವ ಹಕ್ಕನ್ನು ಮೊಟಕುಗೊಳಿಸಲಾಗದು ಎಂದಿದೆ.

ರಾಜ್ಯ ಸರ್ಕಾರಗಳ ವಿಸರ್ಜನೆಯೇ ಸಮಸ್ಯೆ:
ಲೋಕಸಭೆ ಚುನಾವಣೆಯೊಂದಿಗೆ ರಾಜ್ಯ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ಎಲ್ಲಾ ಪ್ರಸ್ತಾಪಗಳು ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳನ್ನು ಗೌರವಿಸದ ಪ್ರವೃತ್ತಿಯನ್ನು ಸಹ ತೋರಿಸುತ್ತದೆ. ಮೊದಲನೆಯದಾಗಿ, ಕೇಂದ್ರ ಸರ್ಕಾರವು ಸಂವಿಧಾನದ 356ನೇ ವಿಧಿಯನ್ನು ನಿರಂಕುಶವಾಗಿ ದುರುಪಯೋಗಪಡಿಸಿಕೊಂಡಿದ್ದು, ಜನರಿಂದ ಆಯ್ಕೆಯಾದ ಹಲವಾರು ರಾಜ್ಯ ಸರ್ಕಾರಗಳನ್ನು ವಿಸರ್ಜಿಸಿದ ಪರಿಣಾಮ ಲೋಕಸಭೆ ಮತ್ತು ಹಲವಾರು ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಯಿತು.

1959ರಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿಸರ್ಜನೆಯೊಂದಿಗೆ ಈ ಪ್ರಕ್ರಿಯೆ ಪ್ರಾರಂಭವಾಯಿತು. ಏಕಕಾಲಕ್ಕೆ ಚುನಾವಣೆ ನಡೆಸುವ ಹೆಸರಿನಲ್ಲಿ ಮುಂದಿಡುವ ಎಲ್ಲ ಪ್ರಸ್ತಾಪಗಳು ರಾಜ್ಯಪಾಲರ ಒಳಗೊಳ್ಳುವಿಕೆ ಮತ್ತು ಆ ಮೂಲಕ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಹೆಚ್ಚಿಸುತ್ತವೆ.

ಭಾರತವು ಅಸಂಖ್ಯಾತ ವೈವಿಧ್ಯತೆಯನ್ನು ಹೊಂದಿರುವ ವಿಶಾಲ ದೇಶವಾಗಿದೆ. ಆದ್ದರಿಂದ ಸಂಯುಕ್ತ ವ್ಯವಸ್ಥೆ (ಫೆಡರಲಿಸಂ) ಆಧಾರಿತ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ ಇಲ್ಲಿ ಉಳಿಯಲು ಸಾಧ್ಯ. ರಾಜ್ಯಗಳಿಗೆ ವಿವಿಧ ಹಂತಗಳಲ್ಲಿ ಚುನಾವಣೆಗಳು ನಡೆಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ವೈಶಿಷ್ಟ್ಯವಾಗಿದೆ. ಆದ್ದರಿಂದ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯಾವುದೇ ಕೃತಕ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸಲಾಗುವುದು. ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ಆಧಾರದ ಮೇಲೆ ಪ್ರಸ್ತುತವಾಗಿರುವ ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಕ್ರಿಸ್‌ಮಸ್ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಸೇವೆ ಮಾಡುವಲ್ಲಿ ಕ್ರಿಶ್ಚಿಯನ್ ಸಮುದಾಯದ ಕೊಡುಗೆಯನ್ನು ಭಾರತವು ಹೆಮ್ಮೆಯಿಂದ ಗುರುತಿಸುತ್ತದೆ ಎಂದು ಹೇಳಿದರು. ಇದು ಚುನಾವಣಾ ಕಾಲದಲ್ಲಿ ಅವರಿಗಾದ ತಾತ್ಕಾಲಿಕ ‘ಜ್ಞಾನೋದಯ’ ಅಷ್ಟೇ.

ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಆಗಿರುವ ತಾರತಮ್ಯ ಮತ್ತು ಅನ್ಯಾಯ ಸಣ್ಣದೇನಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರು ಹೆಮ್ಮೆಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಈಗ ಬೊಬ್ಬಿಡುತ್ತಿದ್ದಾರೆ. ಆದರೆ, ಅವರು ಈ ಸೇವೆಯನ್ನು ಮತಾಂತರಗೊಳಿಸಲಿಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಆರೆಸ್ಸೆಸ್-ಬಿಜೆಪಿ ಪರಿವಾರದವರು ಇನ್ನೂ ದೂಷಣೆ ಮಾಡುತ್ತಿದ್ದಾರೆ.

ಗ್ರಹಾಂ ಸ್ಟೇನ್ಸ್ ಮತ್ತು ಕುಟುಂಬ

ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಹಿಂದುತ್ವ ಪರಿವಾರದವರು ಸಜೀವ ದಹನ ಮಾಡಿದರು. ಆ ಹಂತಕರನ್ನು ಆರ್‌ಎಸ್‌ಎಸ್ ಪರಿವಾರ ರಕ್ಷಣೆ ಮಾಡಿತು. ಬುಡಕಟ್ಟು ಜನರ ಸೇವೆ ಮಾಡಿದ ಪಾದ್ರಿ ಸ್ಟಾನ್ ಸ್ವಾಮಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ತಳ್ಳಿತು. ಅವರು ಜಾಮೀನು ಸಿಗದೆ ಜೈಲಿನಲ್ಲೇ ತಮ್ಮ ಕೊನೆಯುಸಿರೆಳೆದರು. ಇದು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಅನುಮೋದಿಸುವ ಸಂಕೇತವಾ?

ಕರ್ನಾಟಕದಲ್ಲಿ ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೆ ತಂದು ಕ್ರೈಸ್ತರಿಗೆ ಅನಾವಶ್ಯಕವಾಗಿ ಕಿರುಕುಳ ನೀಡಲಾಯಿತು. “ಮತಾಂತರ ಮಾಡುತ್ತಿದ್ದಾರೆ; ಬೈಬಲ್ ಹಂಚುತ್ತಿದ್ದಾರೆ” ಎಂದು ಸುಳ್ಳು ಹೇಳಿಕೊಂಡು ಹಲವು ಚರ್ಚ್ ಗಳ ಮೇಲೆ ಹಿಂದೂ ಪರಿವಾರದವರಿಂದ ದಾಳಿ ಮಾಡಲಾಯಿತು. ಪೊಲೀಸರ ಸಹಭಾಗಿತ್ವದಲ್ಲೇ ಹಲವು ಚರ್ಚ್ ಗಳಿಗೆ ನುಗ್ಗಿ ದಾಂಧಲೆ ಮಾಡಿದ ವರದಿಗಳೂ ಇವೆ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಯುತ್ತಿದೆ. ಕ್ರಿಶ್ಚಿಯನ್ನರಲ್ಲಿ ಬಿಜೆಪಿ ಸ್ವೀಕಾರ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ.

ಫಾದರ್ ಸ್ಟಾನ್ ಸ್ವಾಮಿ

ಚುನಾವಣೆಗೂ ಮುನ್ನ ಮಣಿಪುರದಲ್ಲಿ ಬಿಜೆಪಿ ಒಕ್ಕೂಟ ಆಡಳಿತ ನಡೆಸಿತ್ತು. ಮುಖ್ಯಮಂತ್ರಿಯ ಬೆಂಬಲದೊಂದಿಗೆ ಕ್ರೈಸ್ತ ಜನಾಂಗದ ಕುಕಿಗಳ ವಿರುದ್ಧ ಮತಾಂಧ ಮತ್ತು ಜನಾಂಗೀಯ ದಾಳಿಯನ್ನು ಪ್ರಾರಂಭಿಸಲಾಯಿತು. ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ, ಬೀದಿಯಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈಗಲೂ ಆ ರಾಜ್ಯದಲ್ಲಿ ಕ್ರಿಶ್ಚಿಯನ್ ಜನರ ಮೇಲೆ ದಾಳಿ ಮುಂದುವರಿದಿದೆ. ಆ ರಾಜ್ಯದ ಕಡೆ ತಿರುಗಿಯೂ ನೋಡದ ಪ್ರಧಾನಿ ಈ ರೀತಿ ಮಾತನಾಡುತ್ತಿರುವುದು ಆಘಾತಕಾರಿಯಾಗಿದೆ. ಆದರೆ ಈ ರೀತಿ ಮಾತನಾಡುವುದು ಅವರಿಗೆ ಹೊಸದೇನಲ್ಲ.

ಮಾತು ಒಂದು, ಕ್ರಿಯೆ ಇನ್ನೊಂದು ಆರೆಸ್ಸೆಸ್ ಸಂಘಟನೆಯ ಲಕ್ಷಣ. ಆ ಶಾಲೆಯಲ್ಲಿ ಓದಿದ ನರೇಂದ್ರ ಮೋದಿ ಹೀಗೆ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಅವರ ಕ್ರಿಸ್‌ಮಸ್ ದಿನದ ಭಾಷಣ ಎಷ್ಟು ಸುಳ್ಳಾಗಿತ್ತು ಎಂಬುದು ಕ್ರೈಸ್ತರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವರ ಮಾತಿನಿಂದಲ್ಲ, ಅವರು ಅನುಭವಿಸುವ ಯಾತನೆಗಳ ಆಧಾರದ ಮೇಲೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಭಾರತದ ಸಂಸತ್ತಿನಿಂದ 92 ಸಂಸದರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಪ್ರಜಾಸತ್ತಾತ್ಮಕ ಸಾಧನೆಗಳಲ್ಲಿ ಇದೂ ಒಂದಾಗಿದೆ!

ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡುವುದು ಹೊಸದಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಅನುಮತಿ ನೀಡುವಂತೆ ಧ್ವನಿ ಎತ್ತಿದ್ದಕ್ಕಾಗಿ 71 ಬಾರಿ ಸಂಸತ್ತಿನ 57 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ, ಜಿಎಸ್‌ಟಿ ತೆರಿಗೆ ಹೆಚ್ಚಳ, ಮಹಾರಾಷ್ಟ್ರ ಕುದುರೆ ವ್ಯಾಪಾರ, ಮಣಿಪುರ ಗಲಭೆ, ರಫೇಲ್ ಸಮಸ್ಯೆ, ಟೆಲಿಫೋನ್ ಕದ್ದಾಲಿಕೆ, ಅದಾನಿ ಸಮಸ್ಯೆಯಂತಹ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ 2019 ರಿಂದ 57 ಸಂಸತ್ ಸದಸ್ಯರನ್ನು ಸಂಸತ್ತಿನಲ್ಲಿ 71 ಬಾರಿ ಅಮಾನತುಗೊಳಿಸಲಾಗಿದೆ.

2022ರ ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ತೆರಿಗೆ ಹೆಚ್ಚಳದ ವಿರುದ್ಧ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿತು. ಆದರೆ ಚರ್ಚೆಗೆ ಅನುಮತಿ ನಿರಾಕರಿಸಲಾಯಿತು. ಆ ಸಮಯದಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ 23 ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಎಂಕೆ ಪಕ್ಷದ ಐವರು ಸಂಸದರು ಸೇರಿದಂತೆ ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಯಿತು. ಇದೇ ವಿಚಾರವಾಗಿ ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

2021ರ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆ ಮತ್ತು ರೈತರ ಆಂದೋಲನದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ 12 ಸಂಸದರನ್ನು ರಾಜ್ಯಸಭೆಯಲ್ಲಿ ಅಮಾನತುಗೊಳಿಸಲಾಯಿತು. ಇಂತಹ ಸಮಸ್ಯೆಗಳಿಂದಾಗಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ 57 ಸಂಸದರನ್ನು 71 ಬಾರಿ ಅಮಾನತುಗೊಳಿಸಿರುವುದು ಬಹಿರಂಗವಾಗಿದೆ. ಪ್ರಶ್ನಿಸುವವರನ್ನು ಅಮಾನತು ಗೊಳಿಸುವುದೇ ಬಿಜೆಪಿ ನಾಯಕತ್ವದ ರಾಜಕೀಯ ಶೈಲಿ.

ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರಾ ಅವರನ್ನು ಪದಚ್ಯುತಿ ಮಾಡಿದ ಹಾಗೇ ಮಾಡಲು ಸಾಧ್ಯವಾಗದ ಕಾರಣ ‘ಅಮಾನತು’ ಎಂಬ ಅಸ್ತ್ರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈಗಲೂ ಅದನ್ನೇ ಮಾಡಿದ್ದಾರೆ. 13 ರಂದು ಸಂಸತ್ತಿನ ಮೇಲೆ ಸ್ಮೋಕ್ ಬಾಂಬ್ ಎಸೆಯಲಾಯಿತು. ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ ಕನಿಮೋಳಿ ಕರುಣಾನಿಧಿ ಸೇರಿದಂತೆ 13 ಲೋಕಸಭಾ ಸದಸ್ಯರುಗಳೊಂದಿಗೆ ಒಬ್ಬ ರಾಜ್ಯಸಭಾ ಸದಸ್ಯರೊಬ್ಬರನ್ನೂ ಅಮಾನತುಗೊಳಿಸಲಾಯಿತು. ಅದರ ನಂತರ, 33 ಲೋಕಸಭಾ ಸದಸ್ಯರು ಮತ್ತು 45 ರಾಜ್ಯಸಭಾ ಸದಸ್ಯರು ಸೇರಿದಂತೆ 78 ಸಂಸದರನ್ನು ನಿನ್ನೆ ಅಮಾನತುಗೊಳಿಸಲಾಗಿದೆ. ಹಾಗಾಗಿ ಒಟ್ಟು 92 ಸದಸ್ಯರನ್ನು ಅಮಾನತು ಮಾಡಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಭೇಟಿ ನೀಡಿ ಸಂಸತ್ ಸದಸ್ಯರಿಗೆ ಸಾಂತ್ವನ ಹೇಳಲಿಲ್ಲ? ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಬಂದು ವಿವರಣೆಯನ್ನೂ ನೀಡುತ್ತಿಲ್ಲ? ವಿವರಿಸುವಲ್ಲಿ ಇವರಿಗೆ ಸಮಸ್ಯೆ ಏನಿದೆ?

ಈ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ಅವರು ಹಿಂದಿ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ‘ಸಂಸತ್ತಿನ ಭದ್ರತಾ ಲೋಪದ ಘಟನೆಯು ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವ್ಯವಹಾರದ ಹಿಂದಿನ ವ್ಯಕ್ತಿಗಳು ಮತ್ತು ಅವರ ಉದ್ದೇಶವನ್ನು ಆಳವಾಗಿ ತನಿಖೆ ಮಾಡುವುದು ಅವಶ್ಯಕವಾಗಿದೆ. ಸಂಸತ್ತಿನ ಘಟನೆಯ ಗಂಭೀರತೆಯನ್ನು ಸುಲುಭವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅದೇ ತೀವ್ರತೆಯಿಂದ ಲೋಕಸಭೆಯ ಸ್ಪೀಕರ್ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮೂಹಿಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇಂತಹ ವಿಷಯಗಳ ಮೇಲೆ ನಿರರ್ಥಕ ವಿವಾದಗಳನ್ನು ಎಲ್ಲರೂ ತಪ್ಪಿಸಬೇಕು’ ಎಂದು ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.

ಅದನ್ನೇ ಸಂಸತ್ತಿನಲ್ಲಿ ಹೇಳಿದರೆ ಕಡಿಮೆಯಾಗುವುದೇನು? ಸಂಸತ್ತಿನ ಸದಸ್ಯರಿಗೆ ಯಾವುದೇ ಸ್ಥಳದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಆ ವಿಷಯವನ್ನು ಸಂಸತ್ತಿನಲ್ಲಿ “ಹಕ್ಕುಗಳ ಉಲ್ಲಂಘನೆ” ಎಂಬ ಅರ್ಥದಲ್ಲಿ ಪ್ರಸ್ತಾಪಿಸಿ ಚರ್ಚೆಗಳನ್ನು ನಡೆಸಲಾಗುತ್ತದೆ. ಆದರೆ ಇಲ್ಲಿ ಎಲ್ಲಾ ಸದಸ್ಯರಿಗೆ ಬೆದರಿಕೆ ಇರುವುದಾಗಿ ಕಾಣುತ್ತಿದೆ. ಬಿಜೆಪಿ ಸದಸ್ಯರೂ ಗಾಬರಿಯಾಗಿದ್ದಾರೆ. ಇದು ದೊಡ್ಡ ಬೆದರಿಕೆ ಅಲ್ಲವೇ? ಅದನ್ನು ಚರ್ಚಿಸಬೇಕಲ್ಲವೇ?

ಇದನ್ನು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿಲ್ಲ. “ಗೃಹ ಸಚಿವರು ಉತ್ತರಿಸಬೇಕು” ಎಂದು ಕೇಳುತ್ತಿದ್ದಾರೆ. ಸಂಸತ್ ನಲ್ಲಿ ಗೃಹ ಸಚಿವರು, ಪ್ರಧಾನಿಯ ಬದಲು ಪುಟಗಟ್ಟಲೆ ಭಾಷಣ ಮಾಡುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಈಗ ಅವರು ಉತ್ತರಿಸಬೇಕಾದ ಉತ್ತರವನ್ನು ಏಕೆ ನಿರಾಕರಿಸುತ್ತಿದ್ದಾರೆ? “ಸಂಸತ್ತಿಗೆ ಬರಲು ನಮಗೆ ಯಾವ ರಕ್ಷಣೆ ಇದೆ?” ಎಂದು ಕೇಳುವ ಹಕ್ಕು ಸಂಸತ್ತಿನ ಸದಸ್ಯರಿಗಿಲ್ಲವೇ?