ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸಕ್ಕೆ ಹೋದ ಭಾರತೀಯರನ್ನು ಯುದ್ಧಕ್ಕೆ ದೂಡಲಾಗುತ್ತಿದೆ! - ಓವೈಸಿ » Dynamic Leader
October 20, 2024
ದೇಶ

ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸಕ್ಕೆ ಹೋದ ಭಾರತೀಯರನ್ನು ಯುದ್ಧಕ್ಕೆ ದೂಡಲಾಗುತ್ತಿದೆ! – ಓವೈಸಿ

ಡಿ.ಸಿ.ಪ್ರಕಾಶ್ ಸಂಪಾದಕರು

ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ಗಳ ಮೂಲಕ ಕರೆದೊಯ್ಯದ ಭಾರತೀಯರನ್ನು ಯುದ್ಧಭೂಮಿಗೆ ವರ್ಗಾಯಿಸಲಾಗುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.

ಅಮೆರಿಕ ಸದಸ್ಯರಾಗಿರುವ ನ್ಯಾಟೋಗೆ ಸೇರುವ ಉಕ್ರೇನ್ ಪ್ರಸ್ತಾಪವನ್ನು ವಿರೋಧಿಸಿದ ರಷ್ಯಾ, ಅಧ್ಯಕ್ಷ ಪುಟಿನ್ ಅವರ ಆದೇಶದ ಮೇರೆಗೆ ಫೆಬ್ರವರಿ 24, 2022 ರಂದು ಉಕ್ರೇನ್ ಮೇಲಿನ ಯುದ್ಧ ಪ್ರಾರಂಭವಾಯಿತು. ಯುದ್ಧ ಪ್ರಾರಂಭವಾಗಿ ನಾಳೆಗೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೂ ರಷ್ಯಾದ ದಾಳಿ, ಉಕ್ರೇನ್‌ನ ಪ್ರತಿರೋಧ ನಿರಂತರವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 3 ಲಕ್ಷದ 15 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ವರದಿಗಳು ಹೇಳುತ್ತವೆ.

ಆದಾಗ್ಯೂ, ಉಕ್ರೇನ್ ಸಂಪೂರ್ಣವಾಗಿ ರಷ್ಯಾಕ್ಕೆ ಶರಣಾದರೆ ಮಾತ್ರ ಪುಟಿನ್ ಯುದ್ಧವನ್ನು ನಿಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ, ಉದ್ಯೋಗಕ್ಕಾಗಿ ಏಜೆಂಟ್‌ಗಳಿಂದ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟ ಭಾರತೀಯರನ್ನು ಸೈನ್ಯಕ್ಕೆ ಸ್ವಯಂ ಸೇವಕರು ಎಂಬ ಹೆಸರಿನಲ್ಲಿ, ಆಯುಧಗಳನ್ನು ನಿರ್ವಹಿಸು ತರಬೇತಿ ನೀಡಿ, ಮಾರಿಯುಪೋಲ್, ಖಾರ್ಕಿವ್ ಮತ್ತು ಡೊನೆಟ್ಸ್ಕ್‌ನಲ್ಲಿ ಬಲವಂತಪಡಿಸಿ ಯುದ್ಧಭೂಮಿಗೆ ದೂಡಲಾಗುತ್ತಿದೆ ಎಂಬ ವರದಿಗಳಿವೆ.

ವ್ಲಾಡಿಮಿರ್‌ ಪುಟಿನ್‌

ಇದರಲ್ಲಿ, ವಿದೇಶದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬ ವೀಡಿಯೋಗಳನ್ನು, ‘ಬಾಬಾ ವ್ಲಾಗ್ಸ್’ (Baba Vlogs) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡುತ್ತಿರುವ ಫೈಸಲ್ ಖಾನ್ ಎಂಬಾತನೇ ಭಾರತೀಯರನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಎಐಎಂಐಎಂ (AIMIM) ನಾಯಕ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ಕೆಲಸದ ಹೆಸರಿನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾದ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ಕಡ್ಡಾಯಗೊಳಿಸಲಾಗುತ್ತಿದ್ದು, ಕೂಡಲೇ ಅವರನ್ನು ರಕ್ಷಿಸಿ ಅಲ್ಲಿಂದ ಕರೆತರಲು ನೆರವಾಗುವಂತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, “ತೆಲಂಗಾಣ, ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಿಂದ ನಿರುದ್ಯೋಗಿ ಪುರುಷರನ್ನು ರಷ್ಯಾದಲ್ಲಿ ಕಟ್ಟಡ ಭದ್ರತಾ ಸಿಬ್ಬಂದಿಯ ಕೆಲಸ ಕೊಡಿಸುವುದಾಗಿ ನಂಬಿಸಿ, ಏಜೆಂಟ್‌ಗಳ ಮೂಲಕ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಅವರನ್ನು ವಂಚಿಸಿ ಯುದ್ಧಭೂಮಿಗೆ ಕಳುಹಿಸಲಾಗಿದೆ.

ಅಸಾದುದ್ದೀನ್ ಓವೈಸಿ

ಅಲ್ಲಿ ಸಿಕ್ಕಿಬಿದ್ದವರಿಗೆ ಸಂಬಂಧಿಸಿದಂತೆ, ನನ್ನ ಬಳಿ ಸಹಾಯ ಕೇಳಿ ಬಂದ ಕುಟುಂಬಗಳನ್ನು ನಾನು ಕಳೆದ ಡಿಸೆಂಬರ್‌ನಲ್ಲಿ ಭೇಟಿಯಾದೆ. ಇದಾದ ಬಳಿಕ ಅಲ್ಲಿನ ಜನರನ್ನು ವಾಪಸ್ ಕರೆತರುವಂತೆ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಅವರಿಗೆ ಪತ್ರ ಬರೆದಿದ್ದೇನೆ.

ದುಬೈನಲ್ಲಿರುವ ಫೈಸಲ್ ಖಾನ್, ಮುಂಬೈ ಮೂಲದ ಸುಫಿಯಾನ್ ಮತ್ತು ಭೋಜಾ ಎಂಬುವವರೊಂದಿಗೆ ಸೇರಿ ವಂಚಿಸಿದ್ದಾರೆ. ಅಲ್ಲಿ ಸಿಕ್ಕಿಬಿದ್ದು ಬಲವಂತವಾಗಿ ಯುದ್ಧಭೂಮಿಗೆ ದೂಡಲ್ಪಟ್ಟ ಒಬ್ಬ ಭಾರತೀಯನು ಸಾವನ್ನಪ್ಪಿದ್ದಾನೆ” ಎಂದು ಹೇಳಿದರು.

ಅಲ್ಲದೆ, ಜೈಶಂಕರ್‌ಗೆ ಓವೈಸಿ ಬರೆದಿರುವ ಪತ್ರದಲ್ಲಿ, “ಮೊಹಮ್ಮದ್ ಅಸ್ಫಾನ್, ಅರ್ಬಾಬ್ ಹುಸೇನ್ ಮತ್ತು ಜಹೂರ್ ಅಹ್ಮದ್ ಹೈದರಾಬಾದ್‌ಗೆ ಮರಳಲು ಸಹಾಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರನ್ನು ಭಾರತೀಯ ಏಜೆಂಟರು ದಾರಿ ತಪ್ಪಿಸಿ ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿದ್ದಾರೆ ಎಂಬ ಅಂಶವೂ ಬಹಿರಂಗವಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ

25 ದಿನಗಳಿಂದ ಅವರು ತಮ್ಮ ಕುಟುಂಬದವರನ್ನು ಸಂಪರ್ಕಿಸಿಲ್ಲ. ಅವರ ಕುಟುಂಬಗಳು ತುಂಬಾ ಚಿಂತಿತರಾಗಿದ್ದಾರೆ. ಅಲ್ಲದೆ, ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದನೆ ಮಾಡುವವರಾಗಿದ್ದರು” ಎಂದು ನಮೂದಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವೀಡಿಯೊದಲ್ಲಿ, ಯುರೋಪಿಯನ್ ದೇಶಗಳ ಕೆಲಸದ ಪರವಾನಿಗೆ (Work Permit) ತನಗೆ ಸಿಕ್ಕಿರುವುದಾಗಿ ಹೇಳಿದ್ದ ಫೈಸಲ್ ಖಾನ್, ರಷ್ಯಾದ ಸೈನ್ಯದೊಂದಿಗೆ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದರು. ಮತ್ತೊಂದು ವೀಡಿಯೊದಲ್ಲಿ, ಏಳು ಜನರು ರಷ್ಯಾದಲ್ಲಿ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದರು ಎಂಬುದು ಗಮನಾರ್ಹ.   

Related Posts