ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕಸದ ಬುಟ್ಟಿ Archives » Dynamic Leader
January 13, 2025
Home Posts tagged ಕಸದ ಬುಟ್ಟಿ
ರಾಜಕೀಯ

ಜೂನ್ 4 ರಂದು ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತೀವ್ರವಾಗಿ ಟೀಕಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾದ ನಂತರ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ತಮ್ಮ ಪ್ರಭಾವವನ್ನು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದಕ್ಕಾಗಿ ಶರದ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಧುಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉದ್ಧವ್ ಠಾಕ್ರೆ, “ಕಳೆದ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ನನ್ನ ಜೊತೆಗಿದ್ದರು. ಅವರು ಕಳೆದ 10 ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಪ್ರತಿ ಕ್ಷೇತ್ರವೂ ಗಮನಿಸುತ್ತಿದೆ. ಎರಡು ಬಾರಿ ಗೆದ್ದ ನಂತರ ಧುಲೆ ಕ್ಷೇತ್ರವನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ.

ಕಳೆದ ಬಾರಿ ಮಹಾರಾಷ್ಟ್ರ ನಿಮಗೆ (ಮೋದಿ) 40 ಸೀಟು ಕೊಟ್ಟು ದೆಹಲಿಗೆ ಕಳುಹಿಸಿತ್ತು. ಆದರೆ ಈ ಬಾರಿ ನೀವು ದೆಹಲಿಗೆ ಹೋಗಲು ಮಹಾರಾಷ್ಟ್ರ ನಿಮಗೆ ಸಹಾಯ ಮಾಡುವುದಿಲ್ಲ. ಜೂನ್ 4ರಂದು ಬಿಜೆಪಿಗೆ ಜನ ಕಸದ ತೊಟ್ಟಿ ತೋರಿಸಲಿದ್ದಾರೆ. ಜೂನ್ 5 ರಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಓಡಿ ಹೋದ ರೇವಣ್ಣ ಪರ ಮೋದಿ ಮತ ಯಾಚಿಸುತ್ತಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಅವರನ್ನು ಬಂಧಿಸುತ್ತೇವೆ. ಮೋದಿ ಸರ್ಕಾರ ಮಹಾರಾಷ್ಟ್ರದಿಂದ ಕಿತ್ತುಕೊಂಡಿರುವ ಆಸ್ತಿಗಳನ್ನು ಮಹಾರಾಷ್ಟ್ರಕ್ಕೆ ವಾಪಸ್ ತರುತ್ತೇವೆ” ಎಂದರು.