ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ! » Dynamic Leader
October 21, 2024
ರಾಜಕೀಯ

ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ!

ಬೆಂಗಳೂರು: ಉಡುಪಿ ನಗರದ ಅರೆ ವೈದ್ಯಕೀಯ ಕಾಲೇಜಿನ ವಾಶ್‍ರೂಂನಲ್ಲಿ ವಿದ್ಯಾರ್ಥಿನಿಯೋರ್ವಳ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ಸ್ಪಷ್ಟೀಕರಣ ನೀಡಿದ ನಂತರವೂ ಈ ವಿಚಾರವನ್ನು ಕೆದುಕುತ್ತಿರುವ ಬಿಜೆಪಿಯವರ ಮೇಲೆ ಹರಿಹಾಯ್ದಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 

ಇದನ್ನೂ ಓದಿ: ಹಿಂದೂಗಳೇ ಆಚರಿಸುವ ಮೊಹರಂ ಹಬ್ಬ; 300 ವರ್ಷಗಳಿಂದ ನಡೆದು ಬರುವ ಅದ್ಭುತ!

“ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ವದಂತಿ ಹಬ್ಬಿಸಬೇಡಿ ಎಂದಿದ್ದಾರೆ. ಖುಷ್ಬೂ ಬಿಜೆಪಿ ಸದಸ್ಯೆ. ಬಿಜೆಪಿಯವರಿಗೆ ಅವರ ಮಾತಿನ ಮೇಲೂ ನಂಬಿಕೆಯಿಲ್ಲವೇ?

ಇದನ್ನೂ ಓದಿ: ರೂ.10 ಕೋಟಿಯನ್ನು ತಮ್ಮದಾಗಿಸಿಕೊಂಡ 11 ಸ್ವಚ್ಛತಾ ಮಹಿಳಾ ಕಾರ್ಮಿಕರು!

ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿರುವ ಬಿಜೆಪಿ ಉಡುಪಿ ಪ್ರಕರಣವನ್ನು ‘ರಾಷ್ಟ್ರೀಯ ವಿವಾದ’ ಎಂಬಂತೆ ಬಿಂಬಿಸುತ್ತಿದ್ದಾರೆ. ಮಣಿಪುರದಲ್ಲಿ ಇಬ್ಬರು ‌ಮಹಿಳೆಯರ ನಗ್ನ ಮೆರವಣಿಗೆ ‌ಮಾಡಿ ಅತ್ಯಾಚಾರಗೈದಾಗ ಬಿಜೆಪಿಯವರ ಬಾಯಿ ಸತ್ತು ಹೋಗಿತ್ತು. ಉಡುಪಿ ವಿಚಾರದಲ್ಲಿ ಇಷ್ಟು ಗಲಭೆ ಮಾಡುತ್ತಿರುವ ಬಿಜೆಪಿ ಮಣಿಪುರ ವಿಚಾರದಲ್ಲಿ ಯಾಕೆ ಗಲಭೆ ಎಬ್ಬಿಸಲಿಲ್ಲ? ಎಂದು ಕಿಡಿಕಾರಿದ್ದಾರೆ.

Related Posts